Thursday, April 25, 2024

ಕಲೆ ಮತ್ತು ಸಂಸ್ಕೃತಿ

ಜಗದ ಕವಿ; ಯುಗದ ಕವಿ!

ಕವನ - ಸಂಜಯ್ ಹೊಯ್ಸಳ ವಿಶ್ವ ಮಾನವ ದಿನದ ಶುಭಾಶಯಗಳು ಇಂದು ಕುವೆಂಪು ಜನ್ಮ ದಿನ ನಡೆಮುಂದೆ ನಡೆಮುಂದೆ ನುಗ್ಗಿ ನಡೆ ಮುಂದೆಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆಮುಂದೆಎಂದು ಪಾಂಚಜನ್ಯ ಮೊಳಗಿಸಿದ ಕವಿ||

ಕನ್ನಡ ಚಿತ್ರ ರಂಗಕ್ಕೆ ವಿಭಿನ್ನ ಕೊಡುಗೆ, “ಅವನೇ ಶ್ರಿಮನ್ನಾರಾಯಣ”

ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ದಕ್ಷಿಣ ಭಾರತದ ಇತರ ರಾಜ್ಯದ ಚಿತ್ರ ರಂಗದಂತೆ ಕನ್ನಡವೂ ವಿಭಿನ್ನ ಶೈಲಿಯ ಸಿನಿಮಾ ಪ್ರಯೋಗದಿಂದಾಗಿ ವಿಶ್ವದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಕೆ.ಜಿ.ಎಫ್, ಫೈಲ್ ವಾನ್ ನ ನಂತರ ಹಲವು ಕನ್ನಡ ಸಿನಿಮಗಳು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂತಹ ಒಂದು...

ಹೆಣ್ಣು ಮನೆಯ ನಯನ

ಕವನ ಸುಲೈಮಾನ್ P.S (Lecture in S.Q.S Arabic Collage K.C Road Thalapady) ಕುಟುಂಬದ ಅಡಿಪಾಯವಾಗಿ,ಅಸ್ತಿತ್ವ ವಾಗುವವಳು ಹೆಣ್ಣು.ಸಕ್ರಿಯಲೂ, ಸಬಲಳೂ ಶಕ್ತಿಯೂ ಹೆಣ್ಣು. ಮನೆ ಮಗಳಾಗಿ,...

ಕಫನ್ನಿಗೆ ಕಿಸೆಯಿಲ್ಲ

ಕವಿತೆ ರಚನೆ:ಸಾವನ್ ಕೆ ಸಿಂಧನೂರು Assistant teacher (PCM Kannada)GHS R H COLONY- 2 TQ SINDHANUR DT RAICHUR ಯಾರಿಗೋ ಇಲ್ಲಿ ಅತಿ ಜರೂರಿ ಕೆಲಸವಿದೆ ಮತ್ತೊಬ್ಬ ಜಾಗ ಖಾಲಿ ಮಾಡಬೇಕಿದೆ. ಥೇಟ್ ದ್ರವ್ಯವೊಂದು ಸ್ಥಳ ಅಕ್ರಮಿಸಿದಂತೆ.. ಭೂಮಿಗೆ ನಾನೇ ಬೇಲಿ ಹಾಕಬಹುದಿತ್ತು ಮೊದಲಿಗೆ ನಾನೇ ಹುಟ್ಟಿದ್ದರೆ ಎಂದುಕೊಳ್ಳುತ್ತಲೇ ಯುದ್ಧಕ್ಕೆ ಹೊರಟವರ ಬೆನ್ನ ಹಿಂದಿನ ಸ್ಮಶಾನ ನೆನಪಾಗುತ್ತದೆ. ಒಡೆದ ಬಳೆಗಳ ಚೂರು ಕಣ್ಣಿಗೆ ತಾಕಿ ನನ್ನ ಕತ್ತಿ,...

ನಾಡ ಮಿಡಿತ

ಇಂಡಿಯನ್ ಸೋಷಿಯಲ್ ಫೋರಮ್,ಸೌದಿ ಅರೇಬಿಯಾ. ಇವರು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ "ನಾ ಕಂಡ ಕರುನಾಡು" ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ "ಮಿಸ್ರಿಯಾ.ಐ.ಪಜೀರ್" ಅವರ ಕವನ. ರಚನೆ -ಮಿಸ್ರಿಯಾ.ಐ.ಪಜೀರ್ ಶಿಶುನಾಳನ ಪಾದವ ನುಂಗಿದ ಗೋವಿಂದ ಗುರುವನು ಕಂಡೆ ಗುರುವೆಂಬ ಶಿಲ್ಪಿಯ ಧರ್ಮದೇಟಿಗೆ ಉರುಳಿ ಬಿದ್ದ ಜೈಬುನ್ನಿಸಾಳನೂ ಕಂಡೆ ಬುಡಾನಜ್ಜನ ಕಾಫಿಯ ಘಮಲು ಅಮಲೇರಿಸಿದೆ ದತ್ತಾತ್ರೇಯರ ಜೊತೆಯಲಿ ಕಂಡು ಧರ್ಮದ ನಶೆಯೇರಿಸಿದೆ ಕರುನಾಡ ಮೈಸಿರಿಗೆ ರೇಷ್ಮೆಯುಡಿಸಿದ ಟಿಪ್ಪು ಸುಲ್ತಾನ ಈ ನಾಡು...

ಕನಕನಾಗಲಿಲ್ಲ…..

ಕವನ ಊರು ಊರುಗಳಲ್ಲಿ ಕೇರಿ ಕೇರಿಗಳಲ್ಲಿ ಕನಕರಿದ್ದಾರೆ... ಕನಕಾಧಿಪತಿಗಳಿದ್ದಾರೆ... ಕನಕ ಹಂಚಿದವರಲ್ಲ ನೂರು ತಲೆಮಾರು ಕೂತುಂಡು ತೇಗುವಷ್ಟು ಕನಕ ಬಚ್ಚಿಟ್ಟವರು... ತೊಟ್ಟು ಮೆರೆದವರು...!! ******* ನೆಲದಲ್ಲಿ ಸಿಕ್ಕ ಕನಕವನು ನೆಲೆಗಾಗಿ ಹೂಡಲಿಲ್ಲ... ದೊರೆಯಾಗಲಿಲ್ಲ... ನೆಲೆಯಿಲ್ಲದವನಿಗೆ ಧಾರೆಯೆರೆದಿದ್ದು... ನಾವಿಂದು ನೆಲ ಬಗೆದು ಕನಕ ಕೂಡಿಡುತ ಮತ್ತೆ ಹುಡುಕುತ್ತಿದ್ದೇವೆ, ಹೊನ್ನಿರುವ ಮಣ್ಣನ್ನು, ತವಿಸದಿಹ ನಿಧಿಯನ್ನು!! ******* ಕನಕನೆಂದರೆ ಗುರುಭಕ್ತಿಯೆನ್ನುತಲೇ ಗುರುವಿಗೆ ಅನಾದರ ತೋರಿದ್ದೇವೆ. ಗುರುವನ್ನು ಲಘುವಾಗಿಸಿ, ನಗುವಿನ ಸರಕು ಮಾಡಿದ್ದೇವೆ.. ಕನಕನ ಗುರುಭಕ್ತಿಯನ್ನು ಶ್ರದ್ಧೆಯಿಂದ ಕೇಳುತ್ತೇವೆ.. ಅಷ್ಟೇ ಬೇಗ ಮರೆಯುತ್ತೇವೆ.. ********* ವೇದಿಕೆಯೇರಿ ಗುಣಗಾನ ಮಾಡಿ, ಹಾಡಿ ಕೊಂಡಾಡಿ ಬೆನ್ನು ತಟ್ಟಿಸಿಕೊಂಡೆವು... ಕನಕನ ತತ್ತ್ವ ಕಿವಿಯಿಂದ ಕಿವಿ ದಾಟಿ ಬಾಯಿಯಿಂದ ಬಾಯಿಗೆ ಹರಿದು ಎಲ್ಲೂ ನಿಲ್ಲಲಾರದೆ ಪುನಃ ಕನಕನಲ್ಲಿಗೆ ತೆರಳಿ ಅಂತಸ್ಥಗೊಂಡಿತು... ರಚನೆ: ನಾಖಾರ್ವಿ ಕಂಚುಗೋಡು

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಸಂದೇಶವನ್ನು ಎತ್ತಿ ಹಿಡಿದ `ಬಿಗಿಲ್’

ಲೇಖಕರು:ಮುಹಮ್ಮದ್ ಝಾಮೀರ್ ಕೆ.ಪಿ ಪಕ್ಕಲಡ್ಕ ಯುವ ನಿರ್ದೇಶಕ ಆಟ್ಲಿ (Atlee) ನಿರ್ದೇಶನದ ಈ ಚಿತ್ರ, ತಮಿಳು ನಟ ತಲಪತಿ ವಿಜಯ್ ಹಾಗೂ ನಯನತಾರ ನಟನೆಯ ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ನಿರ್ದೇಶಕ ಅಟ್ಲಿ ಕಳೆದ ಸಿನಿಮಾದ ಹಾಗೆ ಈ ಸಿನಿಮಾದಲ್ಲೂ ಉತ್ತಮ ಸಂದೇಶದೊಂದಿಗೆ ಬಂದಿದ್ದಾರೆ. ಚಿತ್ರದಲ್ಲಿ ಫುಟ್‌ಬಾಲ್ (Football) ರೌಡಿಸಮ್ (Raudisom) ಬಗ್ಗೆ ಇರುವುದರೊಂದಿಗೆ, ಮಹಿಳೆಯರ ಸಮಸ್ಯೆಯನ್ನು ಕೂಡ...

“ಶೂದ್ರರಾಗೋಣ ಬನ್ನಿ” ಶ್ರಮಸಹಿತ ಸರಳ ಬದುಕಿನೆಡೆಗೆ ಪ್ರೀತಿಯ ಕರೆ

ಪುಸ್ತಕ ವಿಮರ್ಶೆ -ಮಹಮ್ಮದ್ ಶರೀಫ್ ಕಾಡುಮಠ ಲೇಖಕರು; ಪ್ರಸನ್ನ ಹೆಗ್ಗೋಡು ಕೃತಿ; ಶೂದ್ರರಾಗೋಣ ಬನ್ನಿ ಪ್ರಕಾಶಕರು ; ಒಂಟಿದನಿ ಪ್ರಕಾಶನ ಬೆಲೆ; ರೂ. 140. ‘ಶೂದ್ರರಾಗೋಣ ಬನ್ನಿ’ ಒಂದು ಅತ್ಯುತ್ತಮ, ಉಪಯುಕ್ತ ಕೃತಿ. ಮಹತ್ವದ ಕೃತಿಯೂ ಹೌದು. ಆಧುನಿಕ ತಂತ್ರಜ್ಞಾನಗಳ ಜೊತೆಗೆ ಯಂತ್ರ ನಾಗರಿಕತೆಗೆ ಮನಸೋತು ಅವುಗಳಿಂದ ಅಭಿವೃದ್ಧಿಯನ್ನು ಆಶಿಸುತ್ತಾ, ಇರುವ ನೆಮ್ಮದಿಯನ್ನು ಕಳೆದುಕೊಂಡು ಮತ್ತೆ ಅದರದೇ ಹುಡುಕಾಟದಲ್ಲಿ...

ಕನ್ನಡ ನಾಡಿಗೆ ಸಲಾಂ

ಬರೆದವರು: ಎಂ.ಅಶೀರುದ್ದೀನ್ ಅಲಿಯಾ, ಮಂಜನಾಡಿ. ಕರುನಾಡು ಕಾರುಣ್ಯದ ಗೂಡು ಪ್ರೀತಿಯ ಹರಸಿ, ಸ್ನೇಹವ ಬೆರಸಿ ನೆರಳನ್ನು ಚಾಚಿದ ಹೆಮ್ಮೆಯ ನಾಡಿಗೆ ಸಲಾಂ ಸಲಾಂ ಜೋಗದ ಜುಳು ಜುಳು ನಾದದ ಸಾಗರದಲೆಗಳ, ಸಾಲು ಮರಗಳ ಕಾವೇರಿಯ ಒಡಲಿನ ಸಹ್ಯಾದ್ರಿಯ ಮಡಿಲಿನ ಹಸಿರು ಸಿಂಗಾರದ ನಾಡಿಗೆ ಸಲಾಂ ಸಲಾಂ ಸಾಹಿತ್ಯ ಸಂಗೀತ ಸಂಸ್ಕೃತಿಯ ಹಿರಿಮೆಯ ಗಳಿಸಿದ ಕೋಟೆ ಕೊತ್ತಲ ಶಿಲ್ಪ ವರ್ಣದ ಕಲೆಗಳುದಾಯಿಸಿದ ಗತ ಕಾಲದ ವೈಭವ ಸಾರುವ ಇತಿಹಾಸದ ಬೀಡಿಗೆ ಸಲಾಂ ಸಲಾಂ ರನ್ನ, ಪಂಪ, ಹರಿಹರ ಕನಕ, ಕಬೀರ,...

ಝರಿಯಂತೆ ಧುಮುಕುತಿರು

(ಕುಸುಮ ಷಟ್ಪದಿ) ಬರೆದವರು: ನಾಗರಾಜ ಖಾರ್ವಿ ಪದವೀಧರ ಶಿಕ್ಷಕ ಸ.ಹಿ.ಪ್ರಾ.ಶಾಲೆ. ಕಲ್ಮಂಜ. ಬಂಟ್ವಾಳ ಹುಟ್ಟಿನೀಂ ಕುಲವಲ್ಲ ಪಟ್ಟಿರ್ದು ಫಲಮಿಲ್ಲ ನೆಟ್ಟ ತರು ನೆಟ್ಟವಗೆ ಫಲಗೊಡುವುದೇ? ಬಿಟ್ಟು ಬಿಡುತಲಿ ಮೋಹ ನಟ್ಟಿರುಳು ಅಲೆದಾಡಿ ಪಟ್ಟು ಬಿಡದೆಯೆ ಜಾನ ಯೋಗಿ ಪಡೆವ|| ಕಣ್ಣುಗಾಣದ ಕುರುಡ ಬಣ್ಣ...

MOST COMMENTED

HOT NEWS