ಮಣ್ಣಿನ ಜೀವವಲ್ಲವೇ ಹಸಿವಂತು ಖಂಡಿತ..!
ಮನುಷ್ಯತ್ವ ಮರೆತಿರುವಿರಿ ನೀವಂತೂ ಖಚಿತ.

ನೀ ಹಸಿದ ಹೊಟ್ಟೆ ಯಾಕಾಗಿ ಕ್ರೂರಿಗಳಿಂದ ಕದ್ದಿರುವೆ ಹೇಳು?
ಆದರೆ ಹಸಿದ ಹೊಟ್ಟೆಯನು ಹೊಡೆಯದಿರು ನೀ ಕೇಳು!

ಆ ಹಸಿದ ಹೊಟ್ಟೆ ದುಃಖದಿಂದಿತ್ತಿತು ಉತ್ತರವ
” ಕೇಳಿ ಪಡೆಯಲು ಎಲ್ಲಿರುವರಿಲ್ಲಿ ಮನುಜರು..!? ”

ಮಾನವ…, ದೌರ್ಜನ್ಯದೆದುರು ನೀ ಮೂಕವಿಸ್ಮಿತನಲ್ಲವೇ..?
ಈಗರಿಯಿತು ಬಿಡು ನೀನಿರುವೆ ಬಲಶಾಲಿಯಾಗಿಯೇ..!

ನಿನ್ನ ರಕ್ತ ಸಂಬಂಧಿಯೇ ಕಣೋ ಮಾನವ.
ಸಹೋದರ ನೀ ಅರಿತಿಲ್ಲವೇ?

ಕೊಂದಾಗ ಪಡೆದೆಯಾ ಇನ್ನೂರು ರುಪಾಯಿಯ ಆ ಜೀವದಲಿ ನೀನು?
ನಾಳೆ ಆತನಲಿ (ದೇವರು) ಉತ್ತರಿಸುವುದಾ ಮರೆಮರೆತು…

ಇಂದು ಸೆಲ್ಫಿ ಕ್ಲಿಕ್ಕಿಸಲು ಮತ್ತ್ಯಾವ ವಿಷಯವ ನೀ ಪಡೆಯಲಿಲ್ಲವೇನು?
ಬಡವನೆಂಬ ತೆಳು ಕಾಗದವ ಕತ್ತರಿಸೊದ ಬಿಟ್ಟು.!

ಸುಹಾನ ಸಫರ್

LEAVE A REPLY

Please enter your comment!
Please enter your name here