ಕವನ

ಭಾಗ-೧

  • ಶಿಕ್ರಾನ್ಶರ್ಫುದ್ದೀನ್ ಮನೆಗಾರ್
    ಪಾಂಡೇಶ್ವರ್, ಮಂಗಳೂರು

ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ,
ಬೆಚ್ಚಿಬೀಳುವ ಕೆಲವು ಸಂಜ್ಞೆಗಳು
ಜನ ಸಮೂಹದ ಮುಂದೆ, ಹಿಂಜರಿಯದೆ,
ಅನಿಷ್ಟಸೂಚಕ ವರ್ತನೆಗಳೊಂದಿಗೆ
ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು,
“ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು
ನಿಮಗಿದೆಯೇ?”
ತರುವಾಯ ಸ್ಥಗಿತಗೊಂಡ ಸಂಶಯವು,
ಪ್ರಚೋದಿಸಿತು ನನ್ನನ್ನು ಚಿಂತನಾಗ್ರಸ್ಥನಾಗಲು…

ಓಹ್ಹೌದು…! ಮತ್ತು ಆ ಸಂಜ್ಞೆಗಳು,
ಪ್ರತಿಯೊಬ್ಬರು ಅರಿಯಲೇ ಬೇಕು.
ಆದ್ದರಿಂದ, ಆ ದುರ್ದೆಶೆಗಳು ಸಂಭವಿಸುವ ಮೊದಲೇ,
ಅವರು ಅವುಗಳನ್ನು ಗುರುತಿಸಬಹುದು!

ಮತ್ತು ಆ ಹೊತ್ತು ಲಜ್ಜೆಯಿಲ್ಲದೆ ಪ್ರತಿಪಾದಿಸುತ್ತಿತ್ತು;
ವಿಶ್ವಾಸಾರ್ಹರನ್ನುಸುಳ್ಳುಗಾರರನ್ನಾಗಿ,
ಮತ್ತು ದ್ರೋಹಿಗಳನ್ನು ಪ್ರಾಮಾಣಿಕ ವಾದಿಗಳನ್ನಾಗಿ!
ಅಪರಾಧಿಗಳು ಶಾಸಕರಾಗುವುದನ್ನು,
ಮತ್ತು ನ್ಯಾಯ ತೀರ್ಪುಗಳ ಮೇಲೆ ಧನದ ಪ್ರಭಾವ ಬೀರುವುದನ್ನು!
ಸುಳ್ಳುಗಾರರ ಮಾತುಗಳು ಉತ್ಸುಕತೆಯಿಂದ ಕೇಳಲಾಗುವುದನ್ನು,
ಮತ್ತು ನೀತಿಬೋಧೆಗಳು ಬಹಿರಂಗವಾಗಿ ನಿರಾಕರಿಸಲಾಗುವುದನ್ನು!
“ಇವುಗಳೇ ಆ ಹೊತ್ತಿನ ಸಂಜ್ಞೆಗಳು”

ಕೇಳಿಕಿವುಡರೇ! ಸಮಯ ತ್ವರಿತವಾಗಿ ಹಾದು ಹೋಗುತ್ತಿದೆ…
ಕೊನೆಗೂ, ಹಿಂದೆ ನುಡಿದ ಆ ಹೋತ್ತಿನ ಸಂಜ್ಞೆಗಳು ಈಗ ಕಾಣಸಿಗುತ್ತದೆ…
ಖ್ಯಾತ ವಂಚಕರು ಮಾರುಕಟ್ಟೆಗಳನ್ನುನಿಯಂತ್ರಿಸುವುದು,
ಮತ್ತು ಸಿಂಹಾಸನಗಳನ್ನು ಕಪಟಿಯರಿಂದ ಅಲಂಕರಿಸಲಾಗುವುದು;
ಬಡ್ಡಿ ಭರಿತ ಸಾಲಯೋಜನೆಗಳು ಜಗತ್ತನ್ನುಆಳುವುದು,
ಬಡವರನ್ನುಇನ್ನೂ ಬಡವರಾಗಿ ಮತ್ತು ಧನಿಕರನ್ನುಇನ್ನೂ ಧನಿಕಗೊಳಿಸುವುದು;
ರಾಸಾಯನಿಕಗಳು ಆಕಾಶದಿಂದ ವರ್ಷಿಸುವುದು,
ಮತ್ತು ಮಳೆಗಳು ಶಾಪವಾಗಿ ಬರಗಳನ್ನು ಫಲಿಸುವುದು;
“ಇವುಗಳೇ ಆ ಹೊತ್ತಿನ ಸಂಜ್ಞೆಗಳು”

ಇಗೋ ಮಾನವ ಕುಲದವರೇ! ಕಣ್ಣುಗಳನ್ನುತೆರೆದು ನೋಡಿ!
ಅಂತರ್ಜಾಲದ ವಾಹಿನಿಗಳು ಬಿಡುವಿಲ್ಲದೆ ಕಾರ್ಯಶೀಲಗೊಂಡರೂ,
ರಕ್ತಸಂಬಂಧಗಳು ಕಾರಣವಿಲ್ಲದೆ ಛಿದ್ರಗೊಳ್ಳುತ್ತಿರುವುದು!
ವಿಶಾಲವಾದ ಪ್ರಪಂಚವು ಕುಗ್ಗಿ ಜಾಗತಿಕ ಗ್ರಾಮವೊಂದಾಗಿದ್ದರೂ,
ಅಸ್ವಸ್ಥನೆರೆಯವರನ್ನು ಭೇಟಿಸಲು ಪುರುಸೊತ್ತು ಇಲ್ಲವಾಗುತ್ತಿರುವುದು!
ಇದೊಂದು ಕಾಲಕ್ಕೆ ಅಪಾಯಕಾರಿ ಬೆದರಿಕೆಯಾಗಿದೆ:
ಗಗನಚುಂಬಿ ಕಟ್ಟಡಗಳ ವಾಸ್ತುಶಿಲ್ಪವು ಅಲಂಕಾರಿಕ ವಿನ್ಯಾಸ ಹೊಂದರೂ,
ವೃದ್ಧ ಹೆತ್ತವರು ವ್ರದ್ಧಾಶ್ರಮಗಳಲ್ಲಿ ಕೊಳೆಯುತ್ತಿರುವುದು!
“ಇವುಗಳೇ ಆ ಹೊತ್ತಿನ ಸಂಜ್ಞೆಗಳು”

ಪುಸ್ತಕಗಳು ಇದ್ದಕ್ಕಿದ್ದಂತೆ ಹೇರಳವಾಗುವುದು,
ಆದರೂ, ಅನಕ್ಷರತೆ ಎಲ್ಲದೆಡೆಗೆ ಹರಡುವುದು;
ಶತಮೂರ್ಖರಿಗೆ ಮಾನ-ಮರ್ಯಾದೆ ದೊರೆಯುವುದು,
ಮತ್ತು ವಿದ್ವಾಂಸರ ಸಲಹೆಗಳು ತಳ್ಳಿಹಾಕಲಾಗುವುದು;
ಲೌಕಿಕ ಲಾಭಕ್ಕಾಗಿ ಜ್ಞಾನವನ್ನುಕಲಿಯಲಾಗುವುದು,
ಮತ್ತು ಕಪಟಿ ಬೋಧಕರ ಸಂಖ್ಯೆಯೂ ಏರುವುದು;
ಅಲ್ಲದೆ, ತಮ್ಮದೇ ಆದ ಉಪದೇಶಗಳನ್ನು ತಮ್ಮ ಬದುಕಿನಲ್ಲಿ
ಅನುಸರಿಸಲು ಬೋಧಕರೇ ವಿಫಲರಾಗುವುದು;
“ಇವುಗಳೇ ಆ ಹೊತ್ತಿನ ಸಂಜ್ಞೆಗಳು”

ಸಂಗೀತಗಳಿಗೆ ಹೆಜ್ಜೆ ಹಾಕುವವರನ್ನುಪ್ರೋತ್ಸಾಹಿಸಲಾವುದು…
ಮತ್ತು ದಿವ್ಯ ಧರ್ಮೋಪದೇಶಗಳನ್ನುನಿರ್ಲಕ್ಷಿಸಲಾಗುವುದು;
ಕೇಶವಿನ್ಯಾಸಗಳು ಅನಿರೀಕ್ಷಿತವಾಗಿ ಮುಳ್ಳು ಹಂದಿಗಳನ್ನುಹೋಲಿಸಲಾರಂಭವಾಗುವುದು…
ಮತ್ತು ಗಂಡಸರು ಹೆಂಗಸರಾಗುವುದು ಮತ್ತು ಹೆಂಗಸರು ಗಂಡಸರಾಗುವುದು;
“ಇವುಗಳೇಆ ಹೊತ್ತಿನ ಸಂಜ್ಞೆಗಳು”

ಆ ಹೊತ್ತು ತನ್ನ ಘೋರ ನೆರಳು ಬೀರುವ ಮೊದಲು,
ಸಮಯದಲ್ಲಿರುವ ಕೃಪೆಗಳು ಮಾಯವಾಗಿ, ಸಮಯ ಕುಗ್ಗುವುದು.
ವರ್ಷಗಳು ತಿಂಗಳಿನಂತೆ ಮತ್ತು ತಿಂಗಳುವಾರದಂತೆ…
ವಾರಗಳು ದಿನಗಳಂತೆ ಮತ್ತು ದಿನಗಳು ಗಂಟೆಗಳಂತೆ…
ಗಂಟೆ ‘ಸುಡುವಎಲೆ’ಯಂತೆ ಕಳೆದು ಹೋಗುತ್ತದೆ!
“ಇವುಗಳೇಆ ಹೊತ್ತಿನ ಸಂಜ್ಞೆಗಳು”

ಅವರು ಕಿವುಡರು, ಮೂಕರು ಮತ್ತು ದ್ರಷ್ಟಿ ಹೀನರು;
ನೂರಾರು ಸಂಜ್ಞೆಗಳು ತೋರಿದ ಬಳಿಕವೂ,
ಪಶ್ಚಾತ್ತಾಪ ಪಡೆದು ಸದ್ಮಾರ್ಗಕ್ಕೆ ಹಿಂದಿರುಗುವುದಿಲ್ಲ!
ಅವರೇ ಆ ಹೊತ್ತನ್ನು ಆಳುವರು!!!
ಇವುಗಳಲ್ಲಿ ಯಾವ್ಯಾವ ಸಂಜ್ಞೆಗಳನ್ನು ನೀವು ನಿರಾಕರಿಸುತ್ತೀರಿ?
ವಾಸ್ತವವಾಗಿ ಇವುಗಳೇ
ಪ್ರಾಜ್ಞ ವಿವೇಕಿಗಳಿಗೆ ಪುರಾವೆಗಳು!
ಆ ಹೊತ್ತು ಶೀಘ್ರವೇ ಆಗಮಿಸುತ್ತಿದೆಂದು!!!

LEAVE A REPLY

Please enter your comment!
Please enter your name here