ಕರ್ನಾಟಕಕ್ಕಾಗಿ ಮಿಡಿದ, ದುಡಿದ ಮತ್ತು ಹೋರಾಡಿದ ಎಲ್ಲ ವೀರರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು – ಇಂಕ್ ಡಬ್ಬಿ ಬಳಗ

ರಾಗ: ಎಸ್. ಎನ್. ತ್ರಿಪಾಠಿ
ಸಾಹಿತ್ಯ: ಶಿಕ್ರಾನ್ ಶರ್ಫುದ್ದೀನ್ ಎಂ

ಇದು ಪಂಪ ಬೆಳಗಿದ ಕನ್ನಡ
ಕವಿ ಕೋಗಿಲೆ ಹಾಡುವ ಕನ್ನಡ
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!

ಉಡುಪಿಯ ಕಿಂಡಿ, ಹಳೇಬೀಡಿನಲ್ಲಿ,
ಪಾವನ ಹಂಪಿ, ಮಂಜೇಶ್ವರ…
ಪುಣ್ಯ ಸುಗಂಧ ಬೀರುವ ಕನ್ನಡ
ಅಕ್ಕ-ದಾಸ ವಾಚಿಸಿದ ಕನ್ನಡ
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!

ಕಿತ್ತೂರು ರಾಣಿ, ಕಮಲಾ ದೇವಿ,
ಅಬ್ಬಕ್ಕ ಚೌಟ, ಮೈಸೂರು ಹುಲಿ…
ವೀರ ಶೂರರ ಮೆಚ್ಚಿನ ಕನ್ನಡ
ಅಂದ ಚೆಂದಾದ ಸುಂದರ ಕನ್ನಡ
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!!

ಸರ್ವರ ಮನಃ ಗೆಲ್ಲುವ ಕನ್ನಡ
ಮನ-ಮಂದೀರ ಶೋಭಿಸುವ ಕನ್ನಡ
ದಿವ್ಯ ಸಾಹಿತ್ಯ ಅರಳಿದೆ, ಓದು ಬಾ
ನಿತ್ಯ ಸತ್ಯ ನುಡಿ ನಮ್ಮ ಕನ್ನಡ !!!


LEAVE A REPLY

Please enter your comment!
Please enter your name here