ಕವನ
- ಸುಮಮಿ
ಓ,
ಕೇಳಿಲ್ಲಿ
ಜನ ನಾಯಕರೆ,
ನಿಮ್ಮೀ
ರಾಜಕೀಯ
ಮೇಲಾಟಕ್ಕೆ
ಕೈ ಹಾಕಿರುದು
ದೇಶದ
ಬೆನ್ನೆಲುಬಿಗೆ,
ಮರೆತಂತಿರುವಿರಿ
ಸುಡುವ
ಮುನ್ನ ಹಿಂತೆಗೆಯಲು
ಬೆರಳುಗಳ.
ಕಿಡಿ
ಹಚ್ಚಾಗಿದೆ,
ಮುಡಿ ಕೆಂಪಾಗುತಿದೆ,
ನೀವೇಕೆ
ನೋಡಬಾರದೊಮ್ಮೆ
ಕಣ್ತೆರೆದು ನಿಮ್ಮ
ಮಾಡ.
ಗಾಳಿಯಲಿ
ಸುಯ್ಯೆಂದು
ಹಾರಿ
ಬೂದಿಯಾಗುವ
ಮುನ್ನ
ಅತ್ತಿತ್ತೊಮ್ಮೆ
ಸುಪ್ಪತಿಗೆಯೋಳ ಕುಳಿತು
ರೈತನ ಬೆಳೆಯ
ಮೇಯ್ದ ದೇಹವನ್ನೊಮ್ಮೆ
ಒಡಾಡಿಸಿ ನೋಡ
ರೈತನ ಪಾಡ.
ನಿಮ್ಮೀ
ಉಳುವವನ
ರಕುತ ಹೀರುವ
ಕಾನೂನ ಕಿತ್ತೊಗೆಯದೆ
ಬಿಡೆವು
ನಾವದ ಕೇಳ.